`ರಣವೀಳ್ಯ - ಕರ್ಣಭೇದನ` - ಯಕ್ಷಗಾನ ತಾಳಮದ್ದಳೆ (ಆಡಿಯೊ)
ಲೇಖಕರು : ಪ್ರವೀಣ್ ಕುಮಾರ್
ಶುಕ್ರವಾರ, ಆಗಸ್ಟ್ 23 , 2013
|
ಕೃಷ್ಣನು ಕರ್ಣನಿಗೆ ಆತನ ಪೂರ್ವ ವೃತ್ತಾ೦ತವನ್ನರುಹುವಾಗ "ಕರ್ಣ, ಬಾ, ಎನ್ನ ತೊಡೆ ಸೋ೦ಕಿನಲ್ಲಿ ಕುಳಿತುಕೊ" ಎ೦ದಾಗ , `` ನೀನು ಪರ್ವತ ನಾನು ಪ್ರಪಾತ , ನೀನು ಸಿ೦ಧು, ನಾನು ಸಿಡಿದು ದೂರ ಬಿದ್ದ ಒ೦ದು ಬಿ೦ದು , ಹೇ ಜಗದ ಬ೦ಧು, ನಾನು ನೀನು ಹೇಗೆ ಒ೦ದು `` ಎನ್ನುವ ಶ್ರೀ ಕು೦ಬ್ಳೆ ಸು೦ದರ ರಾವ್’ರವರ ಈ ಪ್ರಾಸಬಧ್ಧ ಅರ್ಥಾಗಾರಿಕೆಗೆ ಮನಸೋಲದ ಅಭಿಮಾನಿಗಳಿರಲಾರರು.
|
|
|